ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಕೋಮುಸೌಹಾರ್ದಕ್ಕೆ ಬ್ಯಾರಿಗಳ ಕೊಡುಗೆ ಅನನ್ಯ: ರಾಜ್ಯಪಾಲ ಭಾರದ್ವಾಜ್

ಬೆಂಗಳೂರು: ಕೋಮುಸೌಹಾರ್ದಕ್ಕೆ ಬ್ಯಾರಿಗಳ ಕೊಡುಗೆ ಅನನ್ಯ: ರಾಜ್ಯಪಾಲ ಭಾರದ್ವಾಜ್

Mon, 18 Jan 2010 03:16:00  Office Staff   S.O. News Service

ಬೆಂಗಳೂರು, ಜ.೧೭: ಕರ್ನಾಟಕ ಕೋಮು ಸೌಹಾದ ಹಾಗೂ ಶಾಂತಿಗೆ ಹೆಸರಾಗಿದೆ. ಇದನ್ನು ಎಲ್ಲ ಸಮುದಾಯಗಳು ಉಳಿಸಿಕೊಂಡು ಹೋಗಬೇಕು ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಕರೆ ನೀಡಿದ್ದಾರೆ.

ದಿ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ‘ಬ್ಯಾರಿ ವಾರ್ಷಿಕ ಕೂಟ ಮತ್ತು ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

18-bng3.jpg

 

ಇತ್ತೀಚೆಗೆ ಕರ್ನಾಟಕದಲ್ಲಿ ಕೆಲವು ದುಷ್ಟ ಶಕ್ತಿಗಳು ಕೋಮುಸೌಹಾರ್ದ ಹಾಗೂ ಶಾಂತಿಗೆ ಧಕ್ಕೆ ತರುವಂತಹ ಕಾರ್ಯದಲ್ಲಿ ತೊಡಗಿವೆ. ಇದು ಹೆಚ್ಚಾಗಿ ದಕ್ಷಿಣ ಕನ್ನಡದ ಮಂಗ ಳೂರು, ಉಡುಪಿ ಮುಂತಾದ ಜಿಲ್ಲೆ ಗಳಲ್ಲಿ ನಡೆಯುತ್ತಿದ್ದು, ಆ ಭಾಗದ ಜನತೆ  ಬಿಗುವಿನ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈಗಲಾ ದರೂ ಎಲ್ಲ ಸಮುದಾಯದವರು ಎಚ್ಚೆತ್ತುಕೊಂಡು ದುಷ್ಟ ಶಕ್ತಿಗಳ ಅಟ್ಟಹಾಸಕ್ಕೆ ಆಸ್ಪದ ನೀಡದಂತೆ ಒಗ್ಗಟ್ಟಾಗಬೇಕಾಗಿದೆ ಎಂದು ಭಾರದ್ವಾಜ್ ಸಲಹೆ ನೀಡಿದರು.

ಮುಸ್ಲಿಂ ಸಮುದಾಯದ ಧರ್ಮ ಗ್ರಂಥವಾದ ಕುರ್‌ಆನ್‌ನಲ್ಲಿ ಸಮಾನತೆ ಹಾಗೂ ದಯೆಗೆ ಹೆಚ್ಚಿನ ಆದ್ಯತೆ ನೀಡ ಲಾಗಿದೆ. ಈ ಧರ್ಮಗ್ರಂಥದಿಂದಲೇ ಸಂವಿಧಾನದ ೧೪ನೆ ಕಲಮಿನಲ್ಲಿನ ಸಮಾನತೆಯ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿತು ಎಂದರೆ ತಪ್ಪಾಗಲಾರದು ಎಂದು ಅವರು ಅಭಿಪ್ರಾಯಪಟ್ಟರು.

ಶಾಂತಿಪ್ರಿಯರಾಗಿರುವ ಬ್ಯಾರಿ ಸಮುದಾಯ, ಕೋಮು ಸೌಹಾದ ಮೂಡಿಸಲು ತನ್ನದೇ ಆದ ಕೊಡುಗೆ ನೀಡಿದೆ ಎಂದು ಭಾರದ್ವಾಜ್ ಹೇಳಿದರು.
18-bng4.jpg
18-bng5.jpg
18-bng6.jpg
೧೮ ಶತಮಾನದಲ್ಲಿ ಮರ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದ್ದ ಬಪ್ಪಾ ಬ್ಯಾರಿ ಬಪ್ಪನಾಡು, ದುರ್ಗಾ ಪರಮೇಶ್ವರಿ ದೇವಾಲಯವನ್ನು ಮುಲ್ಕಿ ಯಲ್ಲಿ ನಿರ್ಮಾಣ ಮಾಡಿದ. ಬ್ರಿಟಿಷರ ವಿರುದ್ಧ ಹೋರಾಡಿದ ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯವರ ಸೈನ್ಯದಲ್ಲಿ ಬ್ಯಾರಿಗಳಿದ್ದರು. ಅಲ್ಲದೆ, ಸ್ವಾತಂತ್ರ ಹೋರಾಟದಲ್ಲಿ ಬ್ಯಾರಿ ಸಮುದಾಯದ ಹಲವು ಮುಖಂಡರು ಪಾಲ್ಗೊಂಡಿದ್ದರು ಎಂದು ಅವರು ನುಡಿದರು.ಸಮಾರಂಭದಲ್ಲಿ ಬ್ಯಾರಿ ಸಮು ದಾಯದಿಂದ ಜೀವಮಾನದ ಸಾಧನೆ ಗಾಗಿ ಸನ್ಮಾನಿತರಾದ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊದಿನ್‌ರ ಕುರಿತು ಮಾತನಾಡಿದ ಸಂಸದ ಡಿ.ಬಿ. ಚಂದ್ರೇಗೌಡ, ಗೆಳೆತನಕ್ಕೆ ಮತ್ತೊಂದು ಹೆಸರು ಮೊದಿನ್ ಆಗಿದ್ದಾರೆ ಎಂದು ಹೇಳಿದರು. ಗೆಳೆತನಕ್ಕೆ ಅಪಾರ ಗೌರವ ನೀಡುವ ಅವರೊಂದಿಗೆ ಹಿಂದಿ ನಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಮಾಣಿಕರನ್ನು ಹುಡುಕಬೇಕಾದ ಈ ಸಂದರ್ಭದಲ್ಲಿ ಮೊದೀನ್‌ರಂತಹ ಕೆಲವರು ಅಲ್ಲಲ್ಲಿ ಸಿಗುತ್ತಾರೆ ಎಂದು ನುಡಿದರು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಬ್ಯಾರಿ ಸಮುದಾಯ ಮುಂದುವರಿಯುತ್ತಿರು ವುದು ಸಂತಸದ ವಿಷಯ ಎಂದು ಅವರು ಹೇಳಿದರು.
 
ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಶಾಸಕರಾದ ಎನ್.ಎ. ಹಾರಿಸ್, ಯು.ಟಿ.ಖಾದರ್, ಆರ್.ರೋಷನ್ ಬೇಗ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹಮಾನ್, ದಿ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ಜಿ.ಎ.ಬಾವ ಮುಂತಾದವರು ಭಾಗವಹಿಸಿದ್ದರು.

ಜೀವಮಾನದ ಸಾಧನೆಗಾಗಿ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊದಿನ್ ರವರಿಗೆ ದಿ ಬ್ಯಾರಿಸ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.

ನಗರದ ಅಂಬೇಡ್ಕರ್ ಭವನದಲ್ಲಿ ರವಿವಾರ ದಿ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿದ್ದ ‘ಬ್ಯಾರಿ ವಾರ್ಷಿಕ ಕೂಟ ಹಾಗೂ ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಮೊದಿನ್‌ರವರನ್ನು ಸನ್ಮಾನಿಸಿದರು 

Share: